ಹಳೇ ಬಂದರು ಪ್ರದೇಶದಲ್ಲಿ ಇಂದು 11-04-2019 ರಂದು ಬೆಳಿಗ್ಗೆ ಮಂಗಳೂರು ದಕ್ಷಿಣ ವಿಧಾನಸಭಾ ಮಾಜಿ ಶಾಸಕರಾದ ಶ್ರೀ.ಜೆ.ಆರ್.ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀ.ಹರೀಶ್ ಕುಮಾರ್ ರವರು ಜಂಟಿಯಾಗಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಂ.ಮಿಥುನ್‍ರೈ ಅವರ ಪರವಾಗಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಹಳೇ ಬಂದರು ನೌಕರರ ಶ್ರಮಿಕ ಸಂಘದ ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಹಳೇ ಬಂದರಿನ ಅಭಿವೃದ್ದಿ, ಇ.ಎಸ್.ಐ ಆಸ್ಪತ್ರೆಯ ಉನ್ನತೀಕರಣ ,ಶ್ರಮಿಕ ಸಂಘದ ಶ್ರೇಯೋಭಿವೃದ್ದಿಗೋಸ್ಕರ ಹಾಗೂ ಬಂದರಿನ ಸಮಸ್ಯೆಗಳ ಪರಿಹಾರಕ್ಕೋಸ್ಕರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಎಂ ರೈ ಯವರು ಶ್ರಮಿಸಲು ಸದಾ ಸಿದ್ದರಾಗಿದ್ದಾರೆ ಎಂದು ಶ್ರೀ.ಜೆ.ಆರ್.ಲೋಬೋ ಹಾಗೂ ಶ್ರೀ.ಹರೀಶ್ ಕುಮಾರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರಮಿಕ ಸಂಘದ ಮುಖಂಡ ಶ್ರೀ ಇಂತಿಯಾಜ್ , ಮಾಜಿ ಕಾರ್ಪೋರೇಟರ್ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.