ದ.ಕ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಮಿಥುನ್ ರೈಯವರು ಇಂದು ನಂದಾವರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರೊಂದಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ.ಎ.ಸಿ.ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ತುಂಬೆ, ಎ.ಪಿ.ಯಂ.ಸಿ ಅಧ್ಯಕ್ಷ ಶ್ರೀ.ಪದ್ಮನಾಭ ರೈ, ಯುವಕಾಂಗ್ರೆಸ್ ಮುಖಂಡ ಲುಕ್ಮಾನ್, ಸಂಜೀವ ಪೂಜಾರಿ , ರಿಯಾಜ್ ಬಂಟ್ವಾಳ್ ಹಾಗೂ ದೇವಸ್ಥಾನದ ಟ್ರಸ್ಥಿಗಳು ಉಪಸ್ಥಿತರಿದ್ದರು.