ನಗರದ ಅತ್ತಾವರ ವಾರ್ಡಿನ ವ್ಯಾಪ್ತಿಯಲ್ಲಿರುವ ಅತ್ತಾವರ ಹಗೂ ಬಾಬುಗುಡ್ಡೆ ಪ್ರದೇಶಗಳಲ್ಲಿ ಮಾಜಿ ಶಾಸಕರಾದ ಶ್ರೀ ಜೆ.ಆರ್.ಲೋಬೋರವರು ಇಂದು:12-04-2019 ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ಮಿಥುನ್ ರೈ ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಈ ಸಂಧರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಮಾಜಿ ನಿರ್ದೇಶಕ ಟಿ.ಕೆ.ಸುಧೀರ್, ಮಾಜಿ ಕಾರ್ಪೋರೇಟರ್ ಶೈಲಜಾ, ವಿಜಯಲಕ್ಷ್ಮೀ, ಮಹಮ್ಮದ್ ನವಾಝ್, ಫ್ರಾನ್ಸಿಸ್ ಡಿಸೋಜ, ಗೀತಾ ಸುವರ್ಣ, ಐವನ್ ಡಿಸೋಜ, ವಿದ್ಯಾ, ಶಮೀಮ್, ತೌಫಿಕ್, ಸುಜಿತಾ ರೈ ಮೊದಲಾದವರು ಉಪಸ್ಥಿತರಿದ್ದರು.