ಮಂಗಳೂರು,ನ.26: ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಶಿಫಾರಸ್ಸಿನ ಮೇರೆಗೆ ಮಲೆನಾಡು ಪ್ರದೇಶಾಬಿವ್ರದ್ದಿ ಅನುದಾನದಲ್ಲಿ 18 ಲಕ್ಷ ವೆಚ್ಚದಲ್ಲಿ ಉರ್ವ ಕ್ರೀಡಾಂಗಣ ನವೀಕರಣಗೊಳಿಸಲಾಯಿತು. ಇದರ ಉದ್ಘಾಟನಾ ಸಮಾರಂಭದ ಸಮಯದಲ್ಲಿ ಮಾತನಾಡಿದ ಶಾಸಕರು ಎಲ್ಲಿ ನಾವು ಕ್ರೀಡೆಗಳಿಗೆ ಉತ್ತೇಜನ ನೀಡುತ್ತೇವೆ ಅಲ್ಲಿ ಯುವಕರು ಅಡ್ಡ ದಾರಿ ಹಿಡಿಯದೆ ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಗೊಳ್ಳೂತ್ತಾರೆ ಈ ಮುಖೇನಾ ನಾವು ಒಂದು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣಗೊಳಿಸಲು ಸಾದ್ಯವಿದೆ ಎಂದು ಶಾಸಕರು ತಿಳಿಸಿದರು ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 4.90 ಲಕ್ಷ ರೂ ವೆಚ್ಚದಲ್ಲಿ ಎಲ್.ಇ.ಡಿ ಹಾಗು ಪ್ಲಡ್ ಲೈಟ್ ವಿದ್ದ್ಯುದೀಪ ಸಂಪರ್ಕವನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯರಾದ ರಾದಾಕ್ರಷ್ಣ, ಜಯಂತಿ ಆಚಾರ್, ಪಾಲಿಕೆಯ ಉಪ ಆಯುಕ್ತ ಕಾಂತರಾಜ್, ಯಶವಂತ ಕಾಮತ್, ಕಾಂಗ್ರೇಸ್ ಮುಖಂಡ ಉಮೇಶ ಅನಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

urwa_store_02urwa_store_01urwa_store_04