ಮಂಗಳೂರು,ನ.9: ನಗರದ ಆದಂ ಕುದ್ರು ಎಂಬಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರ ಅನುದಾನದಿಂದ 20 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ತಾ 9/11 ರಂದು ಶಾಸಕರು ನಡೆಸಿದರು. ನಂತರ ಮಾತನಾಡಿದ ಶಾಸಕರು ಈ ಪ್ರದೇಶದಲ್ಲಿಯಾವಾಗಲೂ ನೆರೆಯ ಸಮಸ್ಸೆ ಇರುವುದರಿಂದ ಈ ಪ್ರದೇಶವನ್ನು ಒಂದು ಭಿನ್ನ ಪ್ರದೇಶವೆಂದು ತೆಗೆದುಕೊಂಡು ಹಿಂದಿನಿಂದಲೂ ಈ ಪ್ರದೇಶಕ್ಕೆ ಯಾವುದೇ ಪ್ರಾಮುಖ್ಯತೆ ಕೊಡದೆ ಇದ್ದುದರಿಂದ ಈ ಪ್ರದೇಶ ಅಭಿವ್ರದ್ದಿಯಾಗದೆ ಬಾಕಿ ಉಳಿದಿದೆ ಆದ್ದರಿಂದ ಈ ಒಂದು ಕಾಮಗಾರಿಯನ್ನು ಶಾಸಕರ ನಿದಿಯಿಂದ ಬಿಡುಗಡೆ ಮಾಡಿದ ಹಣದಿಂದ ಸುಮಾರು 200 ಮೀಟರ್‍ಗಳಷ್ಟು ರಸ್ತೆಯನ್ನು ನಿರ್ಮಾಣ ಮಾಡಿ ನಂತರ ಮುಂದೆ ಪ್ರತೀ ವರ್ಷ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಪೆರ್Çೀರೇಟರ್‍ರಾದ ಶ್ರೀ ಪ್ರವೀಣ್ ಚಂದ್ರ ಆಳ್ವ, ಉಮೇಶ್ ಚಂದ ಧರ್ಮಗುರುಗಳಾದ ವಂ.ಫಾ ಜೆ.ಬಿ ಸಲ್ದಾನ, ಐವನ್ ಡಿ’ಸೋಜ, ತಿಮೋಥಿ ಡಿ’ಸೋಜ, ಹರ್ಬಟ್ ಡಿ’ಸೋಜ, ಜೋಸೆ¥sóï ಮೊಂತೇರೊ, ಡೆನ್ಜಿಲ್, ಸ್ಟ್ಯಾನಿ, ಅರುಣ್ ಕುವೆಲ್ಲೊ, ರಮಾನಂದ ಪೂಜಾರಿ, ಜೋಸೆ¥sóï ಡಿ’ಸೋಜ, ವಿಲ್ಫೆರ್ಡ್ ಡಿ’ಸೋಜ ಮುಂತಾದವರು ಉಪಸ್ಥಿತರಿದ್ದರು.